Monday, June 8, 2009

ಕುಂಬಾರಿಕೆ

ಕುಂಬಾರಿಕೆ ಮಾಡುದರಿಂದ ಏನು ಲಾಬಾನೇ ಇಲ್ಲಾ, ಅದು ನಮ್ಮ ಅಪ್ಪನ ಕಾಲಕ್ಕೆ ಮುಗೀತು ಹೀಗಂತ ಹೇಳಿದ್ದು ಯಲ್ಲಪ್ಪ ಕುಂಬಾರ. ನಮ್ಮ ಮನೆಯ ಮುಂದೆ ಯೆಲ್ಲಪ್ಪನ ಮನೆ ಇದೆ, ನಾವು ಸಣ್ಣವರಿದ್ದಾಗ ಯಲ್ಲಪ್ಪ ತನ್ನ ಅಪ್ಪನ ಜೊತೆ ಗಡಿಗೆ ತಯಾರಿಸುತ್ತಿದ್ದ. ಆದರೆ ಈಗ ಅದನ್ನು ಬಿಟ್ಟು ಪಂಚರ್ ಅಂಗಡಿ ಹಾಕಿಕೊಂಡಿದ್ದಾನೆ.
ಅವನಿಗೆ ಕುಂಬಾರಿಕೆ ಮಾಡಲು ಇಷ್ಟ ಆದರೆ ಅದರಿಂದ ಮನೆತನ ಸಾಗುವುದಿಲ್ಲವಲ್ಲ. ಆದರೂ ಯೆಲ್ಲಪ್ಪ ಆವಾಗಾವಾಗ ಮಣ್ಣಿನ ಒಲೆಗಳನ್ನು ಬೇರೆ ಕಡೆಯಿಂದ ತಂದು ಮಾರಾಟ ಮಾಡುತ್ತಾನೆ, ಆದರೆ ಅವನೇ ತಯಾರಿಸುವುದಿಲ್ಲ. ಇದಕ್ಕೆ ಕಾರಣ ಆಧುನಿಕರಣ ಎನ್ನಬಹುದು.
ಇಂದಿನ ದಿನ ಗಡಿಗೆಗಳ ಬಳಕೆಯನ್ನು ಜನರು ಕಡಿಮೆ ಮಾಡಿದ್ದಾರೆ ಅಥವಾ ನಿಲ್ಲಿಸಿಯೇ ಬಿಟ್ಟಿದ್ದಾರೆ ಅಂದರೆ ತಪ್ಪಾಗಲಾರದು. ಈ ಕಾರಣದಿಂದ ಮೊದಲಿನಿಂದ ಗಡಿಗೆ ತಯಾರಿಸುತ್ತ ಬಂದವರು ಅದನ್ನು ಬಿಟ್ಟು ಬೇರೆ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಮೊದಲು ಅಡುಗೆ ಮಾಡುವುದಕ್ಕೆ, ನೀರು ಶೇಕರಿಸುವುದಕ್ಕೆ ಪ್ರತಿಯೊಂದಕ್ಕೂ ಮಣ್ಣಿನಿಂದ ತಯಾರ ಮಾಡಿದ ಗಡಿಗೆಗಳನ್ನೇ ಉಪಯೋಗಿಸುತ್ತಿದ್ದರು. ಈ ಮಣ್ಣಿನ ಗಡಿಗೆಗಳು ಆರೋಗ್ಯಕ್ಕೂ ಓಳ್ಳೆಯದು. ಈ ಗಡಿಗೆಗಳನ್ನ ಬಡವರ ಫ್ರಿಜ್ ಎನ್ನುತ್ತಾರೆ.
ಇಂತಹ ಕುಂಬಾರಿಕೆ ಮಾಡುವವರನ್ನು ವುಳಿಸಿ ಬೆಳೆಸುವದು ಅವಶ್ಯಕವಾಗಿದೆ. ಸರಕಾರ ಇವರಿಗೆ ಆರ್ಥಿಕವಾಗಿ ಬಲಿಷ್ಟರನ್ನಾಗಿಸಬೇಕು.

No comments:

Post a Comment