Thursday, June 4, 2009

ರೈತನೇ ನಿಜವಾದ ಕೃಷಿ ವಿಜ್ಣಾನಿ



ವಿಜ್ಞಾನ ಅಭಿವೃದ್ಧಿ ಹೊಂದಿದಂತೆ ಹಲವಾರು ಬದಲಾವಣೆಗಳನ್ನು ನಾವು ನಮ್ಮ ಜೀವನದಲ್ಲಿ ಕಾಣುತ್ತಿದ್ದೇವೆ. ಹಾಗೆ ಕೃಷಿಯಲ್ಲಿಯೂ ಕೂಡ ಗಣನೀಯ ಬದಲಾವಣೆಗಳು ಆಗುತ್ತಿರುವದನ್ನು ನಾವು ಗಮನಿಸಬಹುದಾಗಿದೆ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಆದ ಹಸಿರು ಕ್ರಾಂತಿ ಕೃಷಿ ರಂಗದಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ತಂದಿತು. ಆ ಸಮಯದಲ್ಲಿ ಕೃಷಿ ವಿಜ್ಞಾನಿಗಳು ಹೈಬ್ರೀಡ್ ತಳಿಗಳನ್ನು ಕಂಡು ಹಿಡಿದು ರೈತರಿಗೆ ಬೆಳೆಯಲು ಕೊಟ್ಟರು. ಸಾವಯವ ಪ್ರಧಾನವಾಗಿದ್ದ ಕೃಷಿ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಅಪರಿಮಿತ ಬಳಕೆಯಲ್ಲಿ ಭೂಮಿ ನಲುಗುವಂತಾಯಿತು.



ರೈತ ಅಧಿಕ ಬೆಳೆ ಬೆಳೆದು ಹೆಚ್ಚಿನ ಉತ್ಪನ್ನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದ. ರೈತರು ಕುಲಾಂತರಿ ತಳಿಯ ಹೈಬ್ರೀಡ್ ಬೀಜಗಳನ್ನು ಬಿತ್ತುತ್ತ ದೇಶಿ ಮೂಲದ ತಳಿಗಳನ್ನು ಮರೆಯತೊಡಗಿದ. ಸಾವಯವ, ಕೊಟ್ಟಿಗೆ ಗೊಬ್ಬರಗಳ ಬದಲು ರಾಸಾಯನಿಕ ಗೊಬ್ಬರಗಳನ್ನು ಬಳಸಲು ಪ್ರಾರಂಭಿಸಿದ. ಮೊದಲು ರೈತ ತನ್ನ ಮನೆಯಲ್ಲಿ ಸಾಕಿದ ಜಾನುವಾರುಗಳ ಸಗಣಿಯಿಂದ ಗೊಬ್ಬರವನ್ನು ತಯಾರಿಸಿ ಕೃಷಿ ಭೂಮಿಗೆ ಬಳಸುತ್ತಿದ್ದ, ಆದರೆ ಅದು ಇಂದಿನ ದಿನ ಕಡಿಮೆಯಾಗಿದೆ.



ಭಾರತೀಯ ಕೃಷಿ ಜಾಗತೀಕರಣದ ಸುಳಿಗೆ ಸಿಕ್ಕು ನಲಗುತ್ತಿದೆ. ರೈತ ತನ್ನ ಕೃಷಿ ಮೌಲ್ಯಗಳನ್ನು ಮರೆತು ಪಾಶ್ಚಾತ್ಯರ ಕೃಷಿ ಪದ್ಧತಿಗೆ ಮೊರೆ ಹೋಗುತ್ತಿದ್ದಾನೆ. ರೈತ ಕುಲಾಂತರಿ ತಳಿಗಳನ್ನು ಉಪಯೋಗಿಸಲು ಪ್ರಾರಂಭಿಸಿದ್ದರಿಂದ ಎಷ್ಟೋ ಮೂಲ ದೇಶಿ ಬೀಜ ತಳಿಗಳು ಕಣ್ಮರೆಯಾದವು. ಆದಕಾರಣ ರೈತರು ದೇಶಿ ತಳಿಗಳ ಸಂರಕ್ಷಣೆಗೆ ಮುಂದಾಗಬೇಕಾದುದು ಅವಶ್ಯಕವಾಗಿದೆ.



ವೈರಸ್, ಬ್ಯಾಕ್ಟೀರಿಯಾ, ಚೇಳು, ಜೇಡ ಮತ್ತಿತರ ಜೀವಿಗಳಿಂದ ವಂಶವಾಹಿಗಳನ್ನು ಹೊರತಗೆದು ಬದನೆ, ಬೆಂಡೇಕಾಯಿ, ಆಲೂಗಡ್ಡೆ, ಟೊಮ್ಯಾಟೋ ಮತ್ತು ಮೆಕ್ಕೇಜೋಳದಂಥ ಆಹಾರ ಧಾನ್ಯಗಳ ವಂಶವಾಹಿಯೊಳಗೆ ಬಲವಂತದಿಂದ ಸೇರಿಸಲಾಗುತ್ತ್ದದೆ, ಇದೇ ಕುಲಾಂತರಿ ಆಹಾರ ಧಾನ್ಯ . ಕುಲಾಂತರಿ ಆಹಾರ ಧಾನ್ಯಗಳನ್ನು ಪ್ರಯೋಗಾಲಯದಲ್ಲಿ ಇಲಿಗಳ ಮೇಲೆ ಪರೀಕ್ಷಿಸಿದಾಗ ಅವುಗಳ ಆರೋಗ್ಯ ಹದಗೆಟ್ಟ ಆತಂಕಕಾರಿ ಸಂಗತಿ ಪತ್ತೆಯಾಗಿದೆ. ಇಷ್ಟೇ ಅಲ್ಲದೆ ಸಾಕಷ್ಟು ಇಲಿಗಳು ಅಕಾಲಿಕ ಸಾವಿಗೆ ತುತ್ತಾಗಿವೆ. ಕುಲಾಂತರಿ ಆಹಾರ ಸೇವಿಸಿದ ಪ್ರಾಣಿಗಳ ಸಂತಾನ ಶಕ್ತಿ ಕುಂಠಿತಗೊಂಡು ಅವುಗಳ ಅಂಗಗಳು ಹಾಗೂ ಕೋಶಗಳು ಹಾನಿಗೆ ಈಡಾಗಿವೆ ಎಂಬುದನ್ನು ವಿಜ್ಞಾನಿಗಳಿಂದ ತಿಳಿಯಲಾಗಿದೆ.



ಒಮ್ಮೆ ಕುಲಾಂತರಿ ಬೆಳೆ ಬೆಳೆಯಲು ಆರಂಭವಾರೆ ನಿಸರ್ಗದಲ್ಲಿನ ವಂಶವಾಹಿ ವ್ಯವಸ್ಥೆ ಸಂಪೂರ್ಣ ಬುಡಮೇಲಾಗುವ ಸಾಧ್ಯತೆ ಇದೆ. ಈ ಕುಲಾಂತರಿ ಬೆಳೆಗಳಿಂದಾಗುವ ದುಷ್ಪರಿನಾಮವನ್ನರಿತ ಹಲವಾರು ಪ್ರಮೂಕ ವಿಜ್ಞಾನಿಗಳೂ ಇದನ್ನು ವಿರೋಧಿಸಿದ್ದಾರೆ. ಆದ್ದರಿಂದ ಈ ಕುಲಾಂತರಿಯನ್ನು ನಮ್ಮ ಸರ್ಕಾರ ನಿಷೇಧಿಸುವ ಅವಶ್ಯಕತೆ ಇದೆ. ನಮ್ಮ ಕೃಷಿ ವಿಶ್ವ ವಿದ್ಯಾಲಯಗಳು ದೇಶಿ ತಳಿಗಳ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಬೇಕಾದ ಅವಶ್ಯಕತೆ ಇದೆ.



ಭಾರತ ಶೇ೭೫ರಷ್ಟು ಜನರ ಉದ್ಯೋಗ ಕೃಷಿ, ಆದರೂ ಆಹಾರ ಧಾನ್ಯಗಳಿಗೆ ಬೇರೆ ರಾಷ್ಟ್ರವನ್ನು ಅವಲಂಭಿಸಿರುವುದು ವಿಷಾದನೀಯ. ಆದ್ದರಿಂದ ಸರ್ಕಾರ ಕೃಷಿಗೆ ಹೆಚ್ಚು ಒತ್ತು ಕೊಟ್ಟು ಒಳ್ಳೆಯ ಯೋಜನೆಗಳನ್ನು ಹಮ್ಮಿಕೊಳ್ಳಬೇಕು ಮತ್ತು ರೈತರನ್ನು ಆರ್ಥಿಕವಾಗಿ ಸ್ತೂಲರನ್ನಾಗಿಸಲು ಹೆಚ್ಚು ಹೆಚ್ಚು ಯೋಜನೆಗಳನ್ನು ಜಾರಿಗೊಳಿಸಬೇಕು.

No comments:

Post a Comment