೧೨ ನೇ ಶತಮಾ
ನದ ಕ್ರಾಂತಿ ಯೋಗಿ, ಸಮಾಜ ಸುಧಾರಕ ಮತ್ತು ವೀರಶೈವ ಧರ್ಮದ ಸುಧಾರಕನಾದ ಬಸವಣ್ಣನವರು ನಮ್ಮ ಸಮಾಜಕ್ಕೆ ಕೊಟ್ಟ ಕೊಡುಗೆ ಅಪಾರ. ಅಷ್ಟೇ ಅಲ್ಲದೆ ಇವರ ಕಾಲದಲ್ಲಿ ವಚನ ಸಾಹಿತ್ಯವೂ ಹರಿದು ಬಂತು.ಬಸವಣ್ಣನವರು ೧೨ ನೇ ಶತಮಾನದಲ್ಲಿ ಇದ್ದಂತ ಹಲವಾರು ಅನಿಷ್ಟ ಪದ್ಧತಿಗಳಾದ ಜಾತಿ, ಮೇಲು- ಕೀಳು, ಬಡ- ಬಲ್ಲಿದ ಹೀಗೆ ಇಂತಹ ಪದ್ಧತಿಗಳ ವಿರುದ್ದ ಹೋರಾಡಿ ಸಮಾಜದ ಸುಧಾರಣೆಗೆ ಶ್ರಮಿಸಿದರು. ಅಷ್ಟೇ ಅಲ್ಲದೇ ಮಹಿಳೆಯರಿಗೂ ಸಮಾನ ಸ್ಥಾನ ಮಾನ ಸಿಗಲೆಂದು ಪ್ರತಿಪಾದಿಸಿದರು.
No comments:
Post a Comment