Tuesday, June 9, 2009

ಜಾತಿಯ ಆಧಾರದ ಮೇಲಿನ ಮೀಸಲಾತಿ ಬೇಡ!

ಮೀಸಲಾತಿ ಎಂದರೆ ನಮಗೆ ಗೊತ್ತೇ ಇದೆ, ಅಲ್ಪ ಸಂಖ್ಯಾತರು, ಪರಿಶಿಷ್ಟ ಪಂಗಡದವರು ಮತ್ತು ಹಿಂದುಳಿದ ವರ್ಗದವರಿಗೆ ಪ್ರೋತ್ಸಾಹ ಕೊಟ್ಟು ಇವರು ಕೂಡಾ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದೆ ಬರುವಂತೆ ಮಾಡುವ ವ್ಯವಸ್ಥೆಯಾಗಿದೆ. ನಮ್ಮ ಸಮಾಜದಲ್ಲಿ ಹಿಂದುಳಿದ ವರ್ಗ, ಜಾತಿಗಳೆನಿಸಿಕೊಂಡವರಿಗೆ ಪ್ರತೀ ಕ್ಷೇತ್ರದಲ್ಲೂ ಮೀಸಲಾತಿಯನ್ನು ನೀಡಲಾಗುತ್ತದೆ. ಶಿಕ್ಷಣದಿಂದ ಹಿಡಿದು ಕೆಲಸವನ್ನು ದೊರಕಿಸಿಕೊಡುವುದರ ತನಕ ಈ ಮೀಸಲಾತಿ ಹಿಂದುಳಿದ ವರ್ಗದವರಿಗೆ ಸಹಾಯ ಮಾಡುತ್ತದೆ.

ನಮ್ಮ ಸಮಾಜದಲ್ಲಿ ಹಿಂದೆ ಮೇಲ್ಜಾತಿಯವರು ಕೆಳಜಾತಿಯವರನ್ನು ಶೋಷನೆ ಮಾಡುತ್ತಿದ್ದನ್ನು ನಾವು ಇತಿಹಾಸದ ಮುಖಾಂತರ ತಿಳಿಯಬಹುದು. ಕೆಳಜಾತಿಯವರು ಯಾವುದೇ ಅನುಕೂಲಗಳನ್ನು ಹೊಂದದೆ, ಎಲ್ಲ ಅನೂಕೂಲತೆಗಳು ಮೇಲ್ಜಾತಿಯವರಿಗೆ ಮೀಸಲಿದ್ದವು ಎಂದರೆ ತಪ್ಪಾಗಲಾರದು. ಆ ಕಾರಣದಿಂದ ಸ್ವತಂತ್ರ್ಯ ನಂತರ ಸಂವಿಧಾನ ರಚಿಸುವಾಗ ಹಿಂದುಳಿದ ಜಾತಿ , ವರ್ಗದವರಿಗೆ ಅನುಕೂಲವಾಗಲೆಂದು ಮೀಸಲಾತಿ ಪದ್ಧತಿಯನ್ನು ಹೊರಡಿಸಿದರು.

ಆದರೆ ಇಂದಿನ ದಿನ ಮೊದಲಿನಂತೆ ಜಾತಿ, ಮೇಲು-ಕೀಳು, ಭೇದ-ಭಾವಗಳೆಂಬ ಅನಿಷ್ಟ ಪದ್ಧತಿಗಳು ಕಡಿಮೆಯಾಗಿವೆ ಎನ್ನಬಹುದು. ಸಮಾಜದಲ್ಲಿ ಸಮಾನತೆ ಕಾಣುತ್ತಿದೆ, ಇನ್ನುಮುಂದೆ ಮೀಸಲಾತಿ ಪದ್ಧತಿ ಅಷ್ಟೊಂದು ಅವಶ್ಯಕವಲ್ಲ ಎನ್ನಬಹುದು. ಏಕೆಂದರೆ ಇಂದಿನ ದಿನ ನಮ್ಮ ಸಮಾಜದಲ್ಲಿ ಮೇಲ್ಜಾತಿಯ ಎಷ್ಟೋ ಜನರು ಒಂದು ಹೊತ್ತಿಗೂ ಪರದಾಡುವ, ದಿನಗೂಲಿ ಮಾಡಿ ಜೀವನ ನಡೆಸುವವರನ್ನು ನಾವು ಕಾಣಬಹುದು. ಹಾಗಂತ ಈ ಮೀಸಲಾತಿ ಪದ್ಧತಿಯನ್ನೇ ನಿಲ್ಲಿಸಬೇಕೆಂದು ಹೇಳಲಾಗದು ಆದರೆ ಜಾತಿ ಆಧಾರದ ಮೇಲಿನ ಮೀಸಲಾತಿ ಬೇಡ.

ಮೇಲ್ಜಾತಿಯ ಜನರೆಲ್ಲರು ಶ್ರೀಮಂತರು, ಕೆಳಜಾತಿಯಲ್ಲಿ ಹುಟ್ಟಿದವರೆಲ್ಲರೂ ಬಡವರು ಎನ್ನಲ್ಲಾಗದು. ಎಷ್ಟೋ ಜನ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೋಡಿಸಲಾಗದೆ ಕೂಲಿ ಕೆಲಸಕ್ಕೆ ಕಳಿಸುತ್ತಾರೆ. ಇಂತವರಿಗೂ ಈ ಮೀಸಲಾತಿ ನ್ಯಾಯ ಒದಗಿಸಿಕೊಡಬೇಕಲ್ಲವೇ! ಆದ್ದರಿಂದ ಸರಕಾರ ಜಾತಿಯ ಮೇಲಿನ ಮೀಸಲಾತಿ ನಿಲ್ಲಿಸಿ ವ್ಯಕ್ತಿಯ ಆರ್ಥಿಕತೆಯ ಆಧಾರದ ಮೇಲಿನ ಮೀಸಲಾತಿಯನ್ನು ಹೊರಡಿಸಬೇಕು. ಅಂದಾಗ ಸಮಾಜದಲ್ಲಿನ ಭೇದ- ಭಾವ, ಮೇಲುಕೀಳು ನಿಲ್ಲುತ್ತದೆ. ದೈ

No comments:

Post a Comment