Friday, June 19, 2009

ಸಂಜೀವಿನಿಯಂತೆ ಶಿವಪ್ಪಣ್ಣನ ಸಿಹಿ ನೀರಿನ ಬಾವಿ



ಊರಲ್ಲಿರುವ ಕೆರೆಗಳೆಲ್ಲ ಬತ್ತಿ ಹೋದರು ಚಿಂತೆಯಿಲ್ಲ, ಗುದಗಿ ಶಿವಪ್ಪನ್ನನ ತೋಟದಲ್ಲಿರುವ ಸಿಹಿ ನೀರು ಬಾವಿ ಇದೆಯಲ್ರಿ. ಇಡೀ ಊರಿನ ಜನರೆಲ್ಲರೂ ಶಿವಪ್ಪನ್ನನ ಬಾವಿಯಲ್ಲಿ ಕುಡಿಯಲು ನಿರೋಯುತ್ತಿದ್ದರು ಶಿವಪ್ಪನ್ನ ಬೇಡೆನ್ನದ ಮುಗ್ದ ಮತ್ತು ಉಧಾರ ಮನಸ್ಸಿನವನು. ಅಂದಹಾಗೆ ಯಾರದು ಶಿವಪ್ಪನ್ನ! ಅಂತೀರಾ.





ಧಾರವಾಡ ಜಿಲ್ಲೆ ನವಲಗುಂದ ತಾಲೂಕಿ ಶಲವಡಿ ಗ್ರಾಮದ ಪ್ರಗತಿಪರ ರೈತ ಈ ಶಿವಪ್ಪನ್ನ. ಶಲವಡಿ ಎಂದ ಕೂಡಲೇ ಹಿಂದೆಲ್ಲ ನೀರಿನ ಸಮಸ್ಯೆಯೇ ಎದ್ದು ಕಾಣುತ್ತಿತ್ತು, ಶಲವಡಿಯಷ್ಟೇ ಅಲ್ಲ ನವಲಗುಂದ ತಾಲೂಕಿನ ಹಲವಾರು ಗ್ರಾಮಗಳು ನೀರಿನ ಸಮಸ್ಯೆಯಿಂದ ಕಂಗಾಲಾಗಿದ್ದವು. ಈಗಲೂ ಕೆಲವೊಂದು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇರುವುದು ಕಾಣಬಹುದು.





ಹಿಂದೆ ಮಳೆ ಹೋಯಿತೆಂದರೆ ಕುಡಿಯುವ ನೀರಿಗೆ ಪರದಾಟ ಶುರು. ಇದಕ್ಕೆ ಶಲವಡಿ ಗ್ರಾಮ ಒಂದು ಉದಾಹರಣೆ. ಶಲವಡಿಯಲ್ಲಿ ಹಲವಾರು ಬಾವಿ , ಕೆರೆಗಳಿವೆ, ಅವು ಮಳೆಯಾಧಾರಿತ ನೀರಿನ ಮೂಲಗಳಾಗಿದ್ದವು. ಇಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲೂಶಲವಡಿಯ ಜನರಿಗೆ ಸಂಜೀವಿನಿಯಂತೆ ನೆರವಾಗಿದ್ದು ಗುದಗಿ ಶಿವಪ್ಪನ್ನನ ಸಿಹಿ ನೀರಿನ ಬಾವಿ .





ಗುದಗಿಯವರ ತೋಟ ಎಂದರೆ, ಏನೋ ಮನಸ್ಸಿಗೆ ತಂಪಾಗುತ್ತದೆ ಏಕೆಂದರೆ ಆ ತೋಟ ಅಷ್ಟು ಹಸಿರು ಮತ್ತು ಶಿವಪ್ಪನ್ನನ ವಿಶಾಲ ಹೃದಯ . ಹಳ್ಳದ ದಂಡೆಯ ಮೇಲೆ ಶಿವಪ್ಪನ್ನನ ತೋಟ ಅದರಲ್ಲಿ ತನ್ನ ತಂದೆಯ ಕಾಲದಲ್ಲಿ ನಿರ್ಮಾಣವಾದ ಬಾವಿ . ಊರಿನ ಜನರೆಲ್ಲರೂ ಬರಗಾಲದಲ್ಲಿ ಈ ಬಾವಿ ಯಿಂದಲೇ ಯತ್ತಿನ ಬಂಡಿ, ಒತ್ತುವ ಬಂಡಿಗಳ ಮೂಲಕ ನೀರನ್ನು ಒಯ್ಯುತ್ತಿದ್ದರು. ಶಿವಪ್ಪನ್ನ ಆ ಭಾವಿಯಲ್ಲಿ ಒಂದು ಬೋರ್ವೆಲ್ ಹಾಕಿಸಿದ್ದಾನೆ, ತನ್ನ ಡಿಸೇಲ್ ಹೋದರು ಪರವಾಗಿಲ್ಲ ಅಂತ ನೀರಿಗೆ ಬಂದವರಿಗೆ ಆ ಬೋರ್ವೆಲ್ ಮುಖಾಂತರ ನೀರು ಕೊಡುತ್ತಿದ್ದ. ದೊಡ್ಡ ಟ್ಯಾಂಕರ್ ಗಳಿಗೆ ಮಾತ್ರ ಹಣ ಪಡೆಯುತ್ತಿದ್ದ ಅದು ಆತ್ಮೀಯತೆಯಿಂದ.

No comments:

Post a Comment