Wednesday, October 28, 2009

ಕುಲಾಂತರಿಯ ಅವಾಂತರಗಳು


ಬಿ.ಟಿ ಹತ್ತಿಯಿಂದ ಆದ ದುಷ್ಪರಿಣಾಮಗಳನ್ನು ತಿಳಿದರೂ ಈಗ ಬದನೆಯನ್ನು ಕುಲಾಂತರಿಸಿದ್ದು ಒಂದು ಅವಿವೇಕದ ಕೆಲಸ ಎಂದರೆ ತಪ್ಪಾಗಲಾರದು.

ಕೃಷಿ ವಿಶ್ವವಿದ್ಯಾಲಯಗಳು ಈಗಾಗಲೇ ಪಿರಂಗಿ, ಮರಗೆಣಸು, ಆಲೂಗಡ್ಡೆ, ಟೊಮ್ಯಾಟೋ, ಬೆಂಡೇಕಾಯಿ ಮತ್ತು ಮೆಕ್ಕೇಜೋಳದಂತ ಬೆಳೆಗಳನ್ನು ಕುಲಾಂತರಿಸಿದೆ. ಹಲವಾರು ವಿಜ್ಣಾನಿಗಳು ಈ ಕುಲಾಂತರಿ ನೀತಿಯನ್ನು ವಿರೋಧಿಸಿದ್ದಾರೆ.
ಕುಲಾಂತರಿ ಬದನೆಯಿಂದ ಹೆಚ್ಚಿನ ಫಸಲು ಬರುತ್ತದೆಯಾದರೂ, ಅದರಿಂದಾಗುವ ದುಷ್ಪರಿಣಾಮಗಳೇ ಹೆಚ್ಚು. ಹಾಗೇ ಮೂಲ ದೇಶಿ ಬದನೆ ತಳಿಗಳು ಕಣ್ಮರೆಯಾಗುವಂತ ಗಂಭೀರ ಪರಿಸ್ಥಿತಿ ತಲೆದೋರಬಹುದು.

ಕುಲಾಂತರಿ ಬೆಳೆಗಳೆಂದರೇನು?
ವೈರಸ್, ಬ್ಯಾಕ್ಟೀರಿಯಾ, ಚೇಳು, ಜೇಡ ಮತ್ತಿತರ ಜೀವಿಗಳಿಂದ ವಂಶವಾಹಿಗಾನ್ನು ಹೊರತೆಗೆದು ಬದನೆ, ಬೆಂಡೇಕಾಯಿ, ಆಲೂಗಡ್ಡೆ, ಟೊಮ್ಯಾಟೋ ಮತ್ತು ಮೆಕ್ಕೆಜೋಳದಂಥ ಆಹಾರ ಧಾನ್ಯಗಳ ವಂಶವಾಹಿಯೊಳಗೆ ಬಲವಂತದಿಂದ ಸೇರಿಸಲಾಗುತ್ತದೆ. ಇದೇ ಕುಲಾಂತರಿ ಆಹಾರ ಧಾನ್ಯ.

Sunday, October 25, 2009

ಪತ್ರಕರ್ತರು ಯಾವಾಗಲು ಭಿನ್ನವಾಗಿ ಯೋಚಿಸಬೇಕು; ವಿಶ್ವೇಶ್ವರ ಭಟ್

ಪತ್ರಿಕೋದ್ಯಮಕ್ಕೆ ತನ್ನದೇ ಆದ ಸ್ಥಾನಮಾನಗಳಿವೆ, ಅದಕ್ಕೆ ತಕ್ಕ ಅರ್ಹತೆಗಳನ್ನು ಬೆಳೆಸಿಕೊಳ್ಳದೆ ಪತ್ರಿಕೋದ್ಯಮದಲ್ಲಿ ಬಾಳಲು ಸಾಧ್ಯವಿಲ್ಲ ಎಂದು ವಿಜಯ ಕರ್ನಾಟಕ ದಿನಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್ ಹೇಳಿದರು.


ಮೈಸೂರಿನ ಮಹಾಜನ ಪ್ರಥಮ ದರ್ಜೆ ಪತ್ರಿಕೋದ್ಯಮ ಮಹಾವಿದ್ಯಾಲಯದಲ್ಲಿ ಅಕ್ಟೋಬರ್ ೯ ಮತ್ತು ೧೦, ೨೦೦೯ ರಂದು ನಡೆದ ರಾಜ್ಯ ಮಟ್ಟದ ಎರೆಡು ದಿನಗಳ ಕಾರ್ಯಾಗಾರದಲ್ಲಿ "ಪ್ರಸ್ತುತ ಪತ್ರಿಕೋದ್ಯಮ; ಪತ್ರಕರ್ತರ ಮುಂದಿರುವ ಸೃಜನಶೀಲ ಸವಾಲುಗಳು" ಎಂಬ ವಿಷಯದ ಮೇಲೆ ಅವರು ಮಾತನಾಡುತ್ತಿದ್ದರು.


ಪತ್ರಕರ್ತರು ಯಾವಾಗಲು ಭಿನ್ನವಾಗಿ ಯೋಚಿಸಬೇಕು ಇಲ್ಲದಿದ್ದರೆ ನಮಗು ಉಳಿದವರಿಗು ಏನು ವ್ಯತ್ಯಾಸ ಎಂದ ಅವರು ಇಂದಿನ ದಿನ ತಾಂತ್ರಿಕವಾಗಿ ಬಲಿಷ್ಟವಾಗಿರದಿದ್ದರೆ ನಮ್ಮ ಸ್ಠಾನವನ್ನು ಇನ್ನೊಬ್ಬ ಸಮರ್ಥ ಗಿಟ್ಟಿಸಿಕೊಳ್ಳುತ್ತಾನೆ. ಆದ್ದರಿಂದ ಪತ್ರಕರ್ತರಾಗುವವರು ಮೊದಲೆ ಎಲ್ಲ ವಿಷಯದ ಬಗ್ಗೆ ತಿಳಿದಿರಬೇಕು ಎಂದು ಸಲಹೆ ನೀಡಿದರು.



೧೯೧೩ ರಲ್ಲಿ ಪಾರಿವಾಳದ ಮೂಲಕ ಸುದ್ಧಿ ವಿನಿಮಯ ಮಾಡಿಕೊಳ್ಳುತ್ತಿದ್ದರು. ಆದರೆ ಇಂದಿನ ದಿನ ಕ್ಷಣ ಮಾತ್ರದಲ್ಲಿ ಸುದ್ಧಿ ವಿನಿಮಯ ಮಾಡಬಹುದಾದಂತ ತಂತ್ರಜ್ಣಾನಗಳು ಬಂದಿವೆ. ಆದ್ದರಿಂದ ಪತ್ರಕರ್ತರಾಗುವವರು ಅಂತರ್ಜಾಲದ ಬಗ್ಗೆ ಅಪಾರ ಜ್ಣಾನವನ್ನು ಉಳ್ಳವರಾಗಿರಬೇಕು ಎಂದರು.



ಹಲವಾರು ಪತ್ರಿಕೆಗಳು ಹಿಂದಿನಂತೆಯೆ ಇವೆ. ಪುಟಗಳಲ್ಲಾಗಲಿ ಬರಹದ ಶೈಲಿಯಲ್ಲಾಗಲಿ ಬದಲಾವಣೆ ಎಂಬುದಿಲ್ಲ. ಆದ್ದರಿಂದ ಪತ್ರಿಕೆಗಳು ಬದಲಾಗಬೇಕಿದೆ. ಜನಮನಕ್ಕೆ ಹತ್ತಿರವಾದ ಸುದ್ದಿಗಳು ಮುಖಪುಟದಲ್ಲಿ ಬರಬೇಕು ಮತ್ತು ಪತ್ರಕರ್ತರು ಸೃಜನಶೀಲತೆಯಿಂದ ಯೋಚಿಸಬೇಕು ಎಂದರು.