Wednesday, October 28, 2009

ಕುಲಾಂತರಿಯ ಅವಾಂತರಗಳು


ಬಿ.ಟಿ ಹತ್ತಿಯಿಂದ ಆದ ದುಷ್ಪರಿಣಾಮಗಳನ್ನು ತಿಳಿದರೂ ಈಗ ಬದನೆಯನ್ನು ಕುಲಾಂತರಿಸಿದ್ದು ಒಂದು ಅವಿವೇಕದ ಕೆಲಸ ಎಂದರೆ ತಪ್ಪಾಗಲಾರದು.

ಕೃಷಿ ವಿಶ್ವವಿದ್ಯಾಲಯಗಳು ಈಗಾಗಲೇ ಪಿರಂಗಿ, ಮರಗೆಣಸು, ಆಲೂಗಡ್ಡೆ, ಟೊಮ್ಯಾಟೋ, ಬೆಂಡೇಕಾಯಿ ಮತ್ತು ಮೆಕ್ಕೇಜೋಳದಂತ ಬೆಳೆಗಳನ್ನು ಕುಲಾಂತರಿಸಿದೆ. ಹಲವಾರು ವಿಜ್ಣಾನಿಗಳು ಈ ಕುಲಾಂತರಿ ನೀತಿಯನ್ನು ವಿರೋಧಿಸಿದ್ದಾರೆ.
ಕುಲಾಂತರಿ ಬದನೆಯಿಂದ ಹೆಚ್ಚಿನ ಫಸಲು ಬರುತ್ತದೆಯಾದರೂ, ಅದರಿಂದಾಗುವ ದುಷ್ಪರಿಣಾಮಗಳೇ ಹೆಚ್ಚು. ಹಾಗೇ ಮೂಲ ದೇಶಿ ಬದನೆ ತಳಿಗಳು ಕಣ್ಮರೆಯಾಗುವಂತ ಗಂಭೀರ ಪರಿಸ್ಥಿತಿ ತಲೆದೋರಬಹುದು.

ಕುಲಾಂತರಿ ಬೆಳೆಗಳೆಂದರೇನು?
ವೈರಸ್, ಬ್ಯಾಕ್ಟೀರಿಯಾ, ಚೇಳು, ಜೇಡ ಮತ್ತಿತರ ಜೀವಿಗಳಿಂದ ವಂಶವಾಹಿಗಾನ್ನು ಹೊರತೆಗೆದು ಬದನೆ, ಬೆಂಡೇಕಾಯಿ, ಆಲೂಗಡ್ಡೆ, ಟೊಮ್ಯಾಟೋ ಮತ್ತು ಮೆಕ್ಕೆಜೋಳದಂಥ ಆಹಾರ ಧಾನ್ಯಗಳ ವಂಶವಾಹಿಯೊಳಗೆ ಬಲವಂತದಿಂದ ಸೇರಿಸಲಾಗುತ್ತದೆ. ಇದೇ ಕುಲಾಂತರಿ ಆಹಾರ ಧಾನ್ಯ.

No comments:

Post a Comment