Friday, June 19, 2009

ಸಂಜೀವಿನಿಯಂತೆ ಶಿವಪ್ಪಣ್ಣನ ಸಿಹಿ ನೀರಿನ ಬಾವಿ



ಊರಲ್ಲಿರುವ ಕೆರೆಗಳೆಲ್ಲ ಬತ್ತಿ ಹೋದರು ಚಿಂತೆಯಿಲ್ಲ, ಗುದಗಿ ಶಿವಪ್ಪನ್ನನ ತೋಟದಲ್ಲಿರುವ ಸಿಹಿ ನೀರು ಬಾವಿ ಇದೆಯಲ್ರಿ. ಇಡೀ ಊರಿನ ಜನರೆಲ್ಲರೂ ಶಿವಪ್ಪನ್ನನ ಬಾವಿಯಲ್ಲಿ ಕುಡಿಯಲು ನಿರೋಯುತ್ತಿದ್ದರು ಶಿವಪ್ಪನ್ನ ಬೇಡೆನ್ನದ ಮುಗ್ದ ಮತ್ತು ಉಧಾರ ಮನಸ್ಸಿನವನು. ಅಂದಹಾಗೆ ಯಾರದು ಶಿವಪ್ಪನ್ನ! ಅಂತೀರಾ.





ಧಾರವಾಡ ಜಿಲ್ಲೆ ನವಲಗುಂದ ತಾಲೂಕಿ ಶಲವಡಿ ಗ್ರಾಮದ ಪ್ರಗತಿಪರ ರೈತ ಈ ಶಿವಪ್ಪನ್ನ. ಶಲವಡಿ ಎಂದ ಕೂಡಲೇ ಹಿಂದೆಲ್ಲ ನೀರಿನ ಸಮಸ್ಯೆಯೇ ಎದ್ದು ಕಾಣುತ್ತಿತ್ತು, ಶಲವಡಿಯಷ್ಟೇ ಅಲ್ಲ ನವಲಗುಂದ ತಾಲೂಕಿನ ಹಲವಾರು ಗ್ರಾಮಗಳು ನೀರಿನ ಸಮಸ್ಯೆಯಿಂದ ಕಂಗಾಲಾಗಿದ್ದವು. ಈಗಲೂ ಕೆಲವೊಂದು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇರುವುದು ಕಾಣಬಹುದು.





ಹಿಂದೆ ಮಳೆ ಹೋಯಿತೆಂದರೆ ಕುಡಿಯುವ ನೀರಿಗೆ ಪರದಾಟ ಶುರು. ಇದಕ್ಕೆ ಶಲವಡಿ ಗ್ರಾಮ ಒಂದು ಉದಾಹರಣೆ. ಶಲವಡಿಯಲ್ಲಿ ಹಲವಾರು ಬಾವಿ , ಕೆರೆಗಳಿವೆ, ಅವು ಮಳೆಯಾಧಾರಿತ ನೀರಿನ ಮೂಲಗಳಾಗಿದ್ದವು. ಇಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲೂಶಲವಡಿಯ ಜನರಿಗೆ ಸಂಜೀವಿನಿಯಂತೆ ನೆರವಾಗಿದ್ದು ಗುದಗಿ ಶಿವಪ್ಪನ್ನನ ಸಿಹಿ ನೀರಿನ ಬಾವಿ .





ಗುದಗಿಯವರ ತೋಟ ಎಂದರೆ, ಏನೋ ಮನಸ್ಸಿಗೆ ತಂಪಾಗುತ್ತದೆ ಏಕೆಂದರೆ ಆ ತೋಟ ಅಷ್ಟು ಹಸಿರು ಮತ್ತು ಶಿವಪ್ಪನ್ನನ ವಿಶಾಲ ಹೃದಯ . ಹಳ್ಳದ ದಂಡೆಯ ಮೇಲೆ ಶಿವಪ್ಪನ್ನನ ತೋಟ ಅದರಲ್ಲಿ ತನ್ನ ತಂದೆಯ ಕಾಲದಲ್ಲಿ ನಿರ್ಮಾಣವಾದ ಬಾವಿ . ಊರಿನ ಜನರೆಲ್ಲರೂ ಬರಗಾಲದಲ್ಲಿ ಈ ಬಾವಿ ಯಿಂದಲೇ ಯತ್ತಿನ ಬಂಡಿ, ಒತ್ತುವ ಬಂಡಿಗಳ ಮೂಲಕ ನೀರನ್ನು ಒಯ್ಯುತ್ತಿದ್ದರು. ಶಿವಪ್ಪನ್ನ ಆ ಭಾವಿಯಲ್ಲಿ ಒಂದು ಬೋರ್ವೆಲ್ ಹಾಕಿಸಿದ್ದಾನೆ, ತನ್ನ ಡಿಸೇಲ್ ಹೋದರು ಪರವಾಗಿಲ್ಲ ಅಂತ ನೀರಿಗೆ ಬಂದವರಿಗೆ ಆ ಬೋರ್ವೆಲ್ ಮುಖಾಂತರ ನೀರು ಕೊಡುತ್ತಿದ್ದ. ದೊಡ್ಡ ಟ್ಯಾಂಕರ್ ಗಳಿಗೆ ಮಾತ್ರ ಹಣ ಪಡೆಯುತ್ತಿದ್ದ ಅದು ಆತ್ಮೀಯತೆಯಿಂದ.

Thursday, June 18, 2009

ಆಕಳು ಮೂತ್ರ ಬೆಳೆಗಳಿಗೆ ಮೂಲಮಂತ್ರ

ಭಾರತೀಯ ರೈತರಿಗೆ ಮತ್ತು ಜಾನುವಾರುಗಳಿಗೆ ಬಿಡದ ನಂಟು. ಭೂಮಿಯನ್ನು ಬಿತ್ತುವುದರಿಂದ ಹಿಡಿದು ಫಸಲು ಪಡೆಯುವತನಕ ರೈತ ಜಾನುವಾರುಗಳನ್ನೇ ಅವಲಂಬಿಸಿರುತ್ತಾನೆ. ಅದರಲ್ಲೂ ಆಕಳು ರೈತನಿಗೆ ದೇವರ ಸಮಾನವಿದ್ದಂತೆ. ಆಕಳು ಮೂತ್ರವನ್ನು ಬೆಳೆಗಳಿಗೆ ಗೊಬ್ಬರವನ್ನಾಗಿ ಉಪಯೋಗಿಸುತ್ತಾರೆ. ಆಕಳು ಮೂತ್ರ (ಶಗಣಿ) ಬೆಳೆಗಳಿಗೆ ಮೂಲ ಮಂತ್ರವಿದ್ದಂತೆ.


ಯಾವ ರಾಸಾಯನಿಕ ಗೊಬ್ಬರಗಳು ಮಾಡದಂತ ಕೆಲಸವನ್ನು ಆಕಳು ಮೂತ್ರ ಮಾಡುತ್ತದೆ. ಬೆಳೆಗಳಿಗೆ ನೀರು ಕೊಡುವ ಸಮಯದಲ್ಲಿ ನೀರಿನ ಜೊತೆ ಆಕಳು ಶಗಣಿಯನ್ನು ಮಿಶ್ರಣ ಮಾಡಲಾಗುತ್ತದೆ. ಇದು ಪ್ರತಿ ಬೆಳೆಯನ್ನು ತಲುಪುತ್ತದೆ. ಬೆಳೆ ಪುಷ್ಟಿದಾಯಕವಾಗಲು ಈ ಪದ್ಧತಿ ಸಹಕಾರಿಯಾಗುತ್ತದೆ.

ವಿಧಾನ -

ಹೊಲಕ್ಕೆ ನೀರು ಬರುವ ಮೂಲ ಅಂದರೆ, ಕಾಲುವೆ ಅಥವಾ ಕೊಳವೆ ಹೀಗೆ ನೀರು ಬರುವ ಜಾಗದಲ್ಲಿ ಒಂದು ಸಣ್ಣ ಗುಂಡಿಯನ್ನು ತೋಡಿ . ಆ ಗುಂಡಿಯಲ್ಲಿ ಆಕಳು ಮೂತ್ರವನ್ನು ಶೇಕರಿಸಬೇಕು , ನಂತರ ಕೊಳವೆಯ ಮುಖಾಂತರ ನೀರು ಬಂದಾಗ ಕಟ್ಟಿಗೆಯ ಸಹಾಯದಿಂದಲೋ ಅಥವಾ ಕೈ ಮುಖಾಂತರ ಆ ಆಕಳು ಮೂತ್ರವನ್ನು ಕಲಿಸಬೇಕು. ಹಾಗೆ ಮಾಡುವಾಗ ನೀರಿನಲ್ಲಿ ಮೂತ್ರ ಮಿಶ್ರಣವಾಗಿ ಪ್ರತಿ ಬೆಳೆಯ ಬೇರುಗಳಿಗೆ ನೇರವಾಗಿ ತಲುಪುತ್ತದೆ. ಇದರಿಂದ ಫಸಲು ಚೆನ್ನಾಗಿ ಬರುತ್ತದೆ. ಮತ್ತು ಭೂಮಿಯು ಫಲವತ್ತತೆಯನ್ನು ಕಾಯ್ದುಕೊಳ್ಳುತ್ತದೆ.






Saturday, June 13, 2009

ಭವ್ಯ ಪರಂಪರೆಯ ಹಂಪಿ

ಕನ್ನಡ ನಾಡಿನ ಶಿಲ್ಪಕಲೆ , ಸಂಸ್ಕೃತಿ, ಸಾಹಿತ್ಯ, ಪ್ರತಿ ಬಿಂಬ ಇಂದಿನ ಹಂಪಿ. ಬಳ್ಳಾರಿ ಜಿಲ್ಲೆಯ, ಹೊಸಪೇಟಿಯ ಹತ್ತಿರವಿರುವ ಈ ಹಂಪಿ ವಿಜಯ ನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಭವ್ಯ ಸಂಸ್ಕೃತಿಯ ನೆಲೆವೀಡು ಹಂಪಿ. ಇಂದಿಗೂ ತನ್ನ ಗತವೈಭವವನ್ನು ಸ್ಮಾರಕಗಳು ಮತ್ತು ದೇವಾಲಯಗಳಿಂದ ಎತ್ತಿ ಸಾರುತ್ತದೆ.



ಹಂಪಿಯನ್ನು ಹಲವಾರು ಪ್ರಸಿದ್ಧ ರಾಜ ಮನೆತನಗಳು ಅಳಿಹೊಗಿದ್ದಾರೆ ಅವರು ಕನ್ನಡ ನಾಡು ನುಡಿಗೆ ಕೊಟ್ಟ ಕೊಡುಗೆ ಅಪಾರ. ಅವರಲ್ಲಿ ವಿಜಯ ನಗರ ಸಾಮ್ರಾಜ್ಯವು ಒಂದು, ಅದರಲ್ಲೂ ಶ್ರೀ ಕೃಷ್ಣದೇವರಾಯನ ಕಾಲವನ್ನು ಸುವರ್ಣ ಯುಗ ಎಂದು ಹೇಳಲಾಗಿದೆ. ಮೊದಲು ಹಂಪಿಯನ್ನು ಪಂಪ, ವಿರುಪಾಕ್ಷಪುರ ಮತ್ತು ವಿಜಯ ನಗರ ಎಂತಲೂ ಕರೆಯುತ್ತಿದ್ದರೆಂದು ಇತಿಹಾಸದ ಮೂಲಕ ತಿಳಿಯಲಾಗಿದೆ. ಹಂಪಿ ತನ್ನದೇ ಆದ ವಿಶಿಷ್ಟವಾದ ವಾಸ್ತುಶಿಲ್ಪವನ್ನು ಹೊಂದಿದೆ.



ವಿರುಪಾಕ್ಷ ದೇವಾಲಯ, ಉಗ್ರ ನರಸಿಂಹ, ವಿಠ್ಠಲ ದೇವಾಲಯ, ಲೋಟಸ್ ಮಹಲ್, ನಕ್ಷತ್ರ ಬಾವಿ , ಅನೆ ಲಾಯಗಳು, ಸಾಸಿವೆ ಗಣಪತಿ ಹೀಗೆ ಹಲವಾರು ಬಗೆಯ ಶಿಲ್ಪದಿಂದ ಸ್ಥಾಪಿಸಲಾದ ಸ್ಮಾರಕಗಳು ಮತ್ತು ದೇವಾಲಯಗಳು ಹಂಪಿಯಲ್ಲಿ ಕಾಣ ಸಿಗುತ್ತವೆ.

Friday, June 12, 2009

ಸಮಾಜ ಸುಧಾರಕ ಬಸವಣ್ಣ


೧೨ ನೇ ಶತಮಾನದ ಕ್ರಾಂತಿ ಯೋಗಿ, ಸಮಾಜ ಸುಧಾರಕ ಮತ್ತು ವೀರಶೈವ ಧರ್ಮದ ಸುಧಾರಕನಾದ ಬಸವಣ್ಣನವರು ನಮ್ಮ ಸಮಾಜಕ್ಕೆ ಕೊಟ್ಟ ಕೊಡುಗೆ ಅಪಾರ. ಅಷ್ಟೇ ಅಲ್ಲದೆ ಇವರ ಕಾಲದಲ್ಲಿ ವಚನ ಸಾಹಿತ್ಯವೂ ಹರಿದು ಬಂತು.
ಬಸವಣ್ಣನವರು ೧೨ ನೇ ಶತಮಾನದಲ್ಲಿ ಇದ್ದಂತ ಹಲವಾರು ಅನಿಷ್ಟ ಪದ್ಧತಿಗಳಾದ ಜಾತಿ, ಮೇಲು- ಕೀಳು, ಬಡ- ಬಲ್ಲಿದ ಹೀಗೆ ಇಂತಹ ಪದ್ಧತಿಗಳ ವಿರುದ್ದ ಹೋರಾಡಿ ಸಮಾಜದ ಸುಧಾರಣೆಗೆ ಶ್ರಮಿಸಿದರು. ಅಷ್ಟೇ ಅಲ್ಲದೇ ಮಹಿಳೆಯರಿಗೂ ಸಮಾನ ಸ್ಥಾನ ಮಾನ ಸಿಗಲೆಂದು ಪ್ರತಿಪಾದಿಸಿದರು.

Thursday, June 11, 2009

ಚಿಗುರೋ ಮನದಲಿ ಸಾಹಸ ಕಲೆಗಳು

ನಮ್ಮ ಇತಿಹಾಸವನ್ನು ನೋಡಿದಾಗ ನಮಗೆ ಹಲವಾರು ಸಾಹಸ ಕಲೆಗಳು ಇರುವುದು ಕಂಡು ಬರುತ್ತದೆ. ಅವುಗಳಲ್ಲಿ ಹಗ್ಗ ಮಲ್ಲಗಂಬವು ಒಂದು . ಈ ಮಲ್ಲಗಂಬ ಕಲೆಯು ಬಹಳ ಇತಿಹಾಸವನ್ನು ಹೊಂದಿದೆ . ಇತ್ತೀಚೆಗೆ ಶಲವಡಿಯಲ್ಲಿ ಪ್ರಾರಂಭವಾದ ಬೇಸಿಗೆ ಶಿಬಿರದಲ್ಲಿ ಈ ಹಗ್ಗಮಲ್ಲಗಂಬದ ತರಬೇತಿಯನ್ನು ಕೊಡಲಾಗುತ್ತಿದೆ.

ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಶಲವಡಿಯಲ್ಲಿ ಎಪ್ರಿಲ್ ೧೭ ರಂದು ಪ್ರಾರಂಭವಾದ ಈ ಶಿಬಿರದಲ್ಲಿ ಮಕ್ಕಳಿಗೆ ಹಗ್ಗಮಲ್ಲಗಂಬ ಮತ್ತು ಯೋಗದ ಉಚಿತ ತರಬೇತಿಯನ್ನು ನೀಡಲಾಗುತ್ತಿದೆ . ಈ ಶಿಬಿರದಲ್ಲಿ ೩೦ ಮಕ್ಕಳು ಪಾಲ್ಗೊಂಡು ತರಬೇತಿ ಪಡೆಯುತ್ತಿದ್ದಾರೆ. ಈ ತರಬೇತಿಯಲ್ಲಿ ಒಳ್ಳೆಯ ಆಸಕ್ತಿ ಮತ್ತು ಉತ್ತಮ ಪ್ರದರ್ಶನ ನೀಡುವ ೧೫ ಮಕ್ಕಳನ್ನು ರಾಜ್ಯ ಮಟ್ಟದ ಮಲ್ಲಗಂಬ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ.

ಈ ಶಿಬಿರದಲ್ಲಿ ಮಕ್ಕಳು ಬಹಳ ಆಸಕ್ತಿಯಿಂದ ಪಾಲ್ಗೊಂಡಿರುವುದು ಒಂದು ಸಂತಸದ ವಿಷಯ, ಕಡಿಮೆ ಅವಧಿಯಲ್ಲಿ ಹಲವಾರು ಆಸನಗಳನ್ನು ಕಲಿತು ತರಬೇತುದಾರರಿಗೆ ಮಕ್ಕಳು ಒಳ್ಳೆಯ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ನಮ್ಮ ಪರಂಪರೆಯಲ್ಲೇ ಹಲವಾರು ಕ್ರೀಡೆಗಳು ಮತ್ತು ಸಾಹಸ ಕಲೆಗಳು ಇರುವಾಗ ಪಾಶ್ಚಾತ್ಯರ ಅನುಕರಣೆ ಏಕೆ? ನಮ್ಮ ಕಲೆಗಳನ್ನು ನಾವು ಉಳಿಸುವುದು ಅವಶ್ಯಕವಾಗಿದೆ. ಮಕ್ಕಳಲ್ಲಿ ಇಂತಹ ಕಲೆಗಳ ಮೇಲೆ ಆಸಕ್ತಿ ಮೂಡಿಸುವುದು ಒಳಿತು.

Wednesday, June 10, 2009

ಮಹಾವಿದ್ಯಾಲಯದಲ್ಲೊದು ಪ್ರಾಯೋಗಿಕ ಚಿತ್ರೀಕರಣ

ನಮ್ಮ ಮಹಾವಿದ್ಯಾಲಯದಲ್ಲಿ ಚರ್ಚಾಸ್ಪರ್ಧೆ ಮತ್ತು ಸಂದರ್ಶನದ ಪ್ರಾಯೋಗಿಕ ಛಾಯಾಚಿತ್ರನವನ್ನು ಮಾಡಲಾಗುತ್ತಿದೆ. ಧಿಮಂತ ಪ್ರಶಸ್ತಿ ಪುರಸ್ಕೃತರಾದ ಮತ್ತು ವಿದ್ಯಾಭಾರತಿ ಪ್ರತಿಷ್ಠಾನದ ಐ.ಎಂ.ಸಿ.ಆರ ಹುಬ್ಬಳ್ಳಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ನಯನಾ ಗಂಗಾಧರವರ ಸಂದರ್ಶನವನ್ನು ದಿನಾಂಕ ೧೨-೬-೨೦೦೯ ರಂದು ಹಮ್ಮಿಕೊಳ್ಳಲಾಗಿದೆ.
ಈ ಸಂದರ್ಶನದಲ್ಲಿ ಪ್ರಭಾಕರ ಎಸ.ಸಿ ಮತ್ತು ಶ್ರೀನಿವಾಸ ರೆಡ್ಡಿ ಸಂದರ್ಶಕರಾಗಿ ಪಾಲ್ಗೊಳ್ಳಲಿದ್ದಾರೆ ಹಾಗೂ ವ್ಯಕ್ತಿತ್ವ ವಿಕಸನ ಎಂಬ ವಿಷಯದ ಚರ್ಚೆಯಲ್ಲಿ ಸವಿತಾ ಪಾವಟೆ , ಕೋಮಲ ಮೋಟಗಿ ಮತ್ತು ಸುಜಾತಾ ಗಾಂವ್ಕರ್ ಭಾಗವಹಿಸಲಿದ್ದಾರೆ . ಛಾಯಾಚಿತ್ರನವನ್ನು, ಪತ್ರಿಕೋದ್ಯಮದ ವಿದ್ಯಾರ್ಥಿಗಳೇ ನಿರ್ವಹಿಸಲಿದ್ದಾರೆ . ಈ ಪ್ರಾಯೋಗಿಕ ಚಿತ್ರೀಕರಣ ನಮಗೆ ಒಳ್ಳೆಯ ಅನುಭವ ತರುವಂತದ್ದಾಗಿದೆ ಮತ್ತು ಇದು ನಮಗೆ ಸವಾಲಿನ ಕೆಲಸವಾಗಿದೆ.

Tuesday, June 9, 2009

ಜಾತಿಯ ಆಧಾರದ ಮೇಲಿನ ಮೀಸಲಾತಿ ಬೇಡ!

ಮೀಸಲಾತಿ ಎಂದರೆ ನಮಗೆ ಗೊತ್ತೇ ಇದೆ, ಅಲ್ಪ ಸಂಖ್ಯಾತರು, ಪರಿಶಿಷ್ಟ ಪಂಗಡದವರು ಮತ್ತು ಹಿಂದುಳಿದ ವರ್ಗದವರಿಗೆ ಪ್ರೋತ್ಸಾಹ ಕೊಟ್ಟು ಇವರು ಕೂಡಾ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದೆ ಬರುವಂತೆ ಮಾಡುವ ವ್ಯವಸ್ಥೆಯಾಗಿದೆ. ನಮ್ಮ ಸಮಾಜದಲ್ಲಿ ಹಿಂದುಳಿದ ವರ್ಗ, ಜಾತಿಗಳೆನಿಸಿಕೊಂಡವರಿಗೆ ಪ್ರತೀ ಕ್ಷೇತ್ರದಲ್ಲೂ ಮೀಸಲಾತಿಯನ್ನು ನೀಡಲಾಗುತ್ತದೆ. ಶಿಕ್ಷಣದಿಂದ ಹಿಡಿದು ಕೆಲಸವನ್ನು ದೊರಕಿಸಿಕೊಡುವುದರ ತನಕ ಈ ಮೀಸಲಾತಿ ಹಿಂದುಳಿದ ವರ್ಗದವರಿಗೆ ಸಹಾಯ ಮಾಡುತ್ತದೆ.

ನಮ್ಮ ಸಮಾಜದಲ್ಲಿ ಹಿಂದೆ ಮೇಲ್ಜಾತಿಯವರು ಕೆಳಜಾತಿಯವರನ್ನು ಶೋಷನೆ ಮಾಡುತ್ತಿದ್ದನ್ನು ನಾವು ಇತಿಹಾಸದ ಮುಖಾಂತರ ತಿಳಿಯಬಹುದು. ಕೆಳಜಾತಿಯವರು ಯಾವುದೇ ಅನುಕೂಲಗಳನ್ನು ಹೊಂದದೆ, ಎಲ್ಲ ಅನೂಕೂಲತೆಗಳು ಮೇಲ್ಜಾತಿಯವರಿಗೆ ಮೀಸಲಿದ್ದವು ಎಂದರೆ ತಪ್ಪಾಗಲಾರದು. ಆ ಕಾರಣದಿಂದ ಸ್ವತಂತ್ರ್ಯ ನಂತರ ಸಂವಿಧಾನ ರಚಿಸುವಾಗ ಹಿಂದುಳಿದ ಜಾತಿ , ವರ್ಗದವರಿಗೆ ಅನುಕೂಲವಾಗಲೆಂದು ಮೀಸಲಾತಿ ಪದ್ಧತಿಯನ್ನು ಹೊರಡಿಸಿದರು.

ಆದರೆ ಇಂದಿನ ದಿನ ಮೊದಲಿನಂತೆ ಜಾತಿ, ಮೇಲು-ಕೀಳು, ಭೇದ-ಭಾವಗಳೆಂಬ ಅನಿಷ್ಟ ಪದ್ಧತಿಗಳು ಕಡಿಮೆಯಾಗಿವೆ ಎನ್ನಬಹುದು. ಸಮಾಜದಲ್ಲಿ ಸಮಾನತೆ ಕಾಣುತ್ತಿದೆ, ಇನ್ನುಮುಂದೆ ಮೀಸಲಾತಿ ಪದ್ಧತಿ ಅಷ್ಟೊಂದು ಅವಶ್ಯಕವಲ್ಲ ಎನ್ನಬಹುದು. ಏಕೆಂದರೆ ಇಂದಿನ ದಿನ ನಮ್ಮ ಸಮಾಜದಲ್ಲಿ ಮೇಲ್ಜಾತಿಯ ಎಷ್ಟೋ ಜನರು ಒಂದು ಹೊತ್ತಿಗೂ ಪರದಾಡುವ, ದಿನಗೂಲಿ ಮಾಡಿ ಜೀವನ ನಡೆಸುವವರನ್ನು ನಾವು ಕಾಣಬಹುದು. ಹಾಗಂತ ಈ ಮೀಸಲಾತಿ ಪದ್ಧತಿಯನ್ನೇ ನಿಲ್ಲಿಸಬೇಕೆಂದು ಹೇಳಲಾಗದು ಆದರೆ ಜಾತಿ ಆಧಾರದ ಮೇಲಿನ ಮೀಸಲಾತಿ ಬೇಡ.

ಮೇಲ್ಜಾತಿಯ ಜನರೆಲ್ಲರು ಶ್ರೀಮಂತರು, ಕೆಳಜಾತಿಯಲ್ಲಿ ಹುಟ್ಟಿದವರೆಲ್ಲರೂ ಬಡವರು ಎನ್ನಲ್ಲಾಗದು. ಎಷ್ಟೋ ಜನ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೋಡಿಸಲಾಗದೆ ಕೂಲಿ ಕೆಲಸಕ್ಕೆ ಕಳಿಸುತ್ತಾರೆ. ಇಂತವರಿಗೂ ಈ ಮೀಸಲಾತಿ ನ್ಯಾಯ ಒದಗಿಸಿಕೊಡಬೇಕಲ್ಲವೇ! ಆದ್ದರಿಂದ ಸರಕಾರ ಜಾತಿಯ ಮೇಲಿನ ಮೀಸಲಾತಿ ನಿಲ್ಲಿಸಿ ವ್ಯಕ್ತಿಯ ಆರ್ಥಿಕತೆಯ ಆಧಾರದ ಮೇಲಿನ ಮೀಸಲಾತಿಯನ್ನು ಹೊರಡಿಸಬೇಕು. ಅಂದಾಗ ಸಮಾಜದಲ್ಲಿನ ಭೇದ- ಭಾವ, ಮೇಲುಕೀಳು ನಿಲ್ಲುತ್ತದೆ. ದೈ