ಭಾಷಣ ಮಾಡುವ ಕಲೆ ಎಲ್ಲರಿಗೂ ಸಿದ್ಧಿಸಿರುವುದಿಲ್ಲ ಕೆಲವರಿಗೆ ಇದು ಹುಟ್ಟಿನಿಂದಲೇ ಬರುತ್ತದೆ. ಇನ್ನು ಕೆಲವರಿಗೆ ಸತತ ಪ್ರಯತ್ನದ ಫಲವಾಗಿ ಒಲಿದಿರುತ್ತದೆ. ಇಂತಹ ಕಲೆಯನ್ನು ತನ್ನ ಸತತ ಪ್ರಯತ್ನದಿಂದ ಮತ್ತು ಶಿಕ್ಷಕರ ನೆರವಿನಿಂದ ಕರಗತ ಮಾಡಿಕೊಂಡ ವಿದ್ಯಾರ್ಥಿ ಎ.ವಿ. ಪ್ರಸಾದ. ಪ್ರಾಥಮಿಕ ಶಾಲೆಯಲ್ಲಿ ಕಲಿಯುವಾಗ ಅವರ ಗುರುಗಳು ಒತ್ತಾಯ ಮಾಡಿ ಭಾಷಣ, ಚರ್ಚಾ ಸ್ಪರ್ಧೆಗಳಿಗೆ ಭಾಗವಹಿಸಲು ಹೆಸರು ಸೇರಿಸುತ್ತಿದ್ದರು, ಅದೇ ಇಂದು ನನಗೆ ಭಾಷಣ ಸ್ಪರ್ಧೆಯಲ್ಲಿ ಬಹುಮಾನ ಪಡೆಯಲು ಕಾರಣವಾಗಿದೆ , ಎಂದು ಐ.ಬಿ.ಎಂ.ಆರ್ ಮಹಾವಿದ್ಯಾಲಯದ ಬಿ.ಸಿ.ಎ ವಿದ್ಯಾರ್ಥಿ ಎ.ವಿ.ಪ್ರಸಾದ್ ಹೇಳಿದರು.
ಕಳೆದ ಗುರುವಾರ ಮಾರ್ಚರಂದು ವಿದ್ಯಾಭಾರತಿ ಪ್ರತಿಷ್ಠಾನದ ಇನಸ್ಟಿಟ್ಯುಟ್ ಆಫ್ ಬ್ಯುಸಿನೆಸ್ ಮ್ಯಾನೇಜಮೆಂಟ್ ಆಂಡ ರಿಸರ್ಚ್ (ಐ.ಬಿ.ಎಂ.ಆರ್) ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿದ್ದ ಚರ್ಚಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದುಕೊಂಡ ಎ.ವಿ ಪ್ರಸಾದ ನಮ್ಮ ಜೊತೆ ಅನುಭವವನ್ನು ಹಂಚಿಕೊಂಡದ್ದು ಹೀಗೆ. ನನಗೆ ಚಿಕ್ಕಂದಿನಿಂದ ಭಾಷಣ ಮಾಡುವ ಹವ್ಯಾಸ ಇದೆ, ನಾನು ೫ನೇ ತರಾತಿಯಲ್ಲಿ ಓದುತ್ತಿದ್ದಾಗ ಮೊದಲಬಾರಿಗೆ ಅಂತರ್ ಶಾಲಾ `ಪ್ರತಿಭಾ ಕಾರಂಜಿ'ಯಲ್ಲಿ `ದೂರದರ್ಶನದ ಒಳಿತು ಕೆಡುಕುಗಳು' ಎಂಬ ವಿಷಯದ ಮೇಲೆ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದುಕೊಂಡೆ, ಜಿಲ್ಲಾಮಟ್ಟದಲ್ಲಿ ದ್ವಿತೀಯ ಬಾಹುಮಾನ ಪಡೆದಿದ್ದೇನೆ, ರಾಜ್ಯಮಟ್ಟದಲ್ಲಿ, ತಾಲೂಕ ಮಟ್ಟದಲ್ಲಿ ಭಾಗವಹಿಸಿದ್ದೇನೆ, ಚರ್ಚಾಸ್ಪರ್ಧೆಯಲ್ಲಿ `ಚಾಂಪಿಯನ್ ಶಿಪ್' ಪಡೆದಿದ್ದೇನೆ.
ನನಗೆ ಪುಸ್ತಕ, ಕಾದಂಬರಿ, ಪತ್ರಿಕೆಗಳನ್ನು ಓದುವುದೆಂದರೆ ತುಂಬ ಇಷ್ಟ. ನಾನು ವೇಳೆ ಸಿಕ್ಕಾಗೆಲ್ಲಾ ಗ್ರಂಥಾಲಯದಲ್ಲಿ ಕಳೆಯುತ್ತೇನೆ. ನನಗೆ ದೂರದರ್ಶನದಲ್ಲಿ ವಾರ್ತೆಗಳನ್ನು ಕೇಳುವ ಹವ್ಯಾಸವಿದೆ. ನಾನು ಪದವಿ ಮುಗಿಸಿದ ನಂತರ ಆಯ್.ಎ.ಎಸ್ ಮಾಡಬೇಕೆಂದುಕೊಂಡಿದ್ದೇನೆ. ಚರ್ಚಾ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಕ್ಕೆ ಏನೆನಿಸುತ್ತದೆ? ಎಂಬ ಪ್ರಶ್ನೆಗೆ ಉತ್ತರಿಸಿದ್ದು ಹೀಗೆ, `ಪ್ರಯತ್ನಕ್ಕೆ ತಕ್ಕ ಪ್ರತಿಫಲ ಇದ್ದೇ ಇರುತ್ತದೆ', ಹಾಗೆ ನನಗೆ ಬಹುಮಾನ ಬಂದಿದೆ. ಒಂದು ಯಶಸ್ಸಿನ ಹಿಂದೆ ಒಬ್ಬ ಗುರುವಿನ ಮಾರ್ಗದರ್ಶನ ಇರುತ್ತದೆ. ಈ ಚರ್ಚಾಸ್ಪರ್ಧೆಗೆ ಸಂಬಂಧ ಪಟ್ಟ ವಿಷಯವನ್ನು ಸಂಗ್ರಹಿಸಲು ಪ್ರೊ.ಹರ್ಷವರ್ಧನ ಶೀಲವಂತ ಸಹಾಯ ಮಾಡಿದ್ದಾರೆ ಎಂದರು. ಇಷ್ಟೆಲ್ಲಾ ಹವ್ಯಾಸಗಳ ಮಧ್ಯೆಯೂ ಪ್ರಸಾದ ತನ್ನ ವ್ಯಾಸಾಂಗದಲ್ಲಿ ಹಿಂದೆ ಬಿದ್ದಿಲ್ಲ. ಮನಸಿದ್ದರೆ ಮಾರ್ಗ ಎಂಬಂತೆ ಪ್ರತಿ ಕೆಲಸದಲ್ಲಿ ಆಸಕ್ತಿ ಇದ್ದರೆ ಯಶಸ್ಸು ಖಂಡಿತ.
No comments:
Post a Comment