Tuesday, May 26, 2009

ಡೆಕಾಥ್ಲಾನ್ ಮ್ಯಾನೇಜಮೆಂಟ್ ಫೆಸ್ಟ್-೨೦೦೯


ಆಕಾಶದಲ್ಲಿ ನಕ್ಷತ್ರಗಳ ಹಾಗೆ ಪಳ ಪಳನೆ ಚುರುಕಿನಿಂದ ಹೊಳೆಯುತ್ತ, ಹುಮ್ಮಸ್ಸಿನಿಂದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಲವಾರು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಸಂಭ್ರಮಿಸಲು ಐಬಿಎಂಆರ್ ಒಂದು ವೇಧಿಕೆಯನ್ನು ಕಲ್ಪಿಸಿಕೊಟ್ಟಿತ್ತು , ಅದೇ ಡೆಕಾಥ್ಲಾನ್ ಮ್ಯಾನೇಜಮೆಂಟ್ ಫೆಸ್ಟ್-೨೦೦೯.



ಮೇ ೧೨, ೨೦೦೯ ಮತ್ತು ಮೇ೧೩ ೨೦೦೯ ರಂದು ರಾಷ್ಟ್ರಮಟ್ಟದ ಅಧ್ಯಯನ ಮೇಳವನ್ನು ಐಬಿಎಂಆರ್ ಹುಬ್ಬಳ್ಳಿಯ ಟಿ.ಬಿ ರೇವಣಕರ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿತ್ತು. ಡೆಕಾಥ್ಲಾನ್ ಮ್ಯಾನೇಜಮೆಂಟ್ ಫೆಸ್ಟ್-೨೦೦೯ ಯಶಸ್ವಿಯಾಗಲು ವಿದ್ಯಾರ್ಥಿಗಳ ಪಾತ್ರ ಬಹು ದೊಡ್ಡದು. ನಿರೂಪಣೆಯಿಂದ ಹಿಡಿದು ಪ್ರೆಸ್ ನೋಟ್ಸ್ ಮುಟ್ಟಿಸುವತನಕ ವಿದ್ಯಾರ್ಥಿಗಳದೆ ಕಸರತ್ತು. ನಾನು ಪತ್ರಿಕೋದ್ಯಮದ ವಿದ್ಯಾರ್ಥಿಯಾಗಿದ್ದರಿಂದ ಇದು ನನಗೆ ಒಂದು ಒಳ್ಳೆಯ ಅನುಭವ.



ಅದ್ಯಯನ ಮೇಳ ಎಂಬಿಎ ವಿದ್ಯರ್ಥಿಗಳಿಗೆ ಮೀಸಲಿದ್ದರೂ ಅಲ್ಲಿಯ ಜವಾಬ್ಧಾರಿಯನ್ನು ನಮಗೂ ಅಂದರೆ ಪತ್ರಿಕೋದ್ಯಮದ ವಿದ್ಯರ್ಥಿಗಳಿಗೂ ವಹಿಸಲಾಗಿತ್ತು. ನಮ್ಮ ಗುರುಗಳಾದ ಹರ್ಷವರ್ಧನ ಶೀಲವಂತ ಅವರು ನಮ್ಮನ್ನು ಎರೆಡು ಗುಂಪುಗಳಾಗಿ ವಿಂಗಡಿಸಿ ನಮಗೆ ಎರೆಡು ದಿನದ ವೇಳಾ ಪಟ್ಟಿಯನ್ನು ಹಾಕಿಕೊಟ್ಟಿದ್ದರು. ಈ ಎರೆಡು ದಿನಗಳಲ್ಲಿ ನಡೆಯುವ ಕಾರ್ಯಕ್ರಮಗಳ ಫೊಟೋ ತೆಗೆಯುವುದು, ವಿಡಿಯೋ ಮಾಡುವುದು ಮತ್ತು ವರಧಿ ಮಾಡಿ ದಿನ ಪತ್ರಿಕೆಗಳಿಗೆ ಕಳಿಸುವ ಜವಾಬ್ಧಾರಿಯನ್ನು ನಮ್ಮ ಮೇಲೆಯೆ ಬಿಟ್ಟಿದ್ದರು.



ಇನ್ನೊಂದು ಮುಕ್ಯವಾದ ವಿಷಯವೆಂದರೆ ನಾವು ನಮ್ಮ ಐಎಂಸಿಆರ್ ಮಹಾವಿದ್ಯಾಲಯದಲ್ಲಿ ಹರ್ಷವರ್ಧನ ಶೀಲವಂತ ಗುರುಗಳ ಮಾರ್ಗದರ್ಶನದಲ್ಲಿ ದೃಷ್ಟಿ ಸೃಷ್ಟಿ ಎಂಬ ಪತ್ರಿಕೆಯನ್ನು ತರುತ್ತಿದ್ದೇವೆ. ಅದರಂತೆ ಈ ಎರೆಡು ದಿನದ ಡೆಕಾಥ್ಲಾನ್ ಅದ್ಯಯನ ಮೇಳದ ಪ್ರಯುಕ್ತ ದಿನಕ್ಕೊಂದರಂತೆ ಅಂದು ನಡೆಯುವ ಕಾರ್ಯಕ್ರಮಗಳ ವರಧಿಯನ್ನು ಆ ದೃಷ್ಟಿ ಸೃಷ್ಟಿ ಪತ್ರಿಕೆಯಲ್ಲಿ ತರಬೇಕಾಗಿತ್ತು. ನಾವೆಲ್ಲ ಪತ್ರಿಕೋದ್ಯಮದ ವಿದ್ಯಾರ್ಥಿಗಳು ಪ್ರತಿ ಕೆಲಸವನ್ನು ಹಂಚಿಕೊಂಡಿದ್ದೆವು. ಅದರಂತೆ ನಮ್ಮ ತಂಡದವರು ಫೊಟೋ, ವಿಡಿಯೋ ಮತ್ತು ವರಧಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದೆವು. ವೇಧಿಕೆಯ ಮೇಲೆ ಹೋಗಿ ವಿಡಿಯೋ ಮಾಡುವಾಗಂತು ರೋಮಾಂಚಣವಾದಂತೆ ಅನುಭವ. ಇನ್ನೊಂದು ತಂಡ ಪೇಜ್ ಎಡಿಟಿಂಗ್ ಮಾಡಿದರು, ಅಂತೂ ಮೊದಲ ದಿನದ ಪತ್ರಿಕೆ ಹೊರಗೆ ಬಂತು.



ಮೊದಲ ಪತ್ರಿಕೆಯಲ್ಲಿ ಮೇ ೧೨ ರಂದು ನಡೆದ ಉದ್ಘಾಟನಾ ಸಮಾರಂಭ, ಐಸ್ ಬ್ರೇಕಿಂಗ್, ಬ್ಯುಜಿನೆಸ್ ಕ್ವಿಜ್, ಮಾರ್ಕೆಟಿಂಗ್, ಫೈನಾನ್ಸ್, ಪೇಪರ್ ಪ್ರಸಂಟೇಶನ್ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ವರಧಿ ಮತ್ತು ಫೊಟೋಗಳನ್ನು ಹಾಕಲಾಗಿತ್ತು. ಕುಷಿ ಕುಷಿಯಿಂದ ಮೊದಲ ಪತ್ರಿಕೆಗಳನ್ನು ಡೆಕಾಥ್ಲಾನಗೆ ಆಗಮಿಸಿದ್ದ ವಿವಿಧ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಹಂಚಿದೆವು ಮತ್ತು ಅವರಿಂದ ಮೆಚ್ಚುಗೆಯ ಮಾತನ್ನು ಗಿಟ್ಟಿಸಿಕೊಂಡೆವು. ಸಂತಸದಲ್ಲೆ ಮರುದಿನ ಪತ್ರಿಕೆಯನ್ನು ಹೊರತರಲು ಸಿದ್ದವಾದೆವು. ಅಷ್ಟರಲ್ಲೆ ಕಂಪ್ಯೂಟರ್ ಸರ್ ದೀಪಕ್ ಅವರು ಮತ್ತೊಂದು ಪತ್ರಿಕೆಯನ್ನು ತರಬೇಕು ಅದು ಡೆಡ್ ಲೈನ್ ಒಳಗಾಗಿ ಎಂದರು. ಈ ಪತ್ರಿಕೆಯನ್ನು ಎರೆಡು ತಂಡಗಳು ಕೂಡಿ ಮಾಡಿದೆವು.



ಮತ್ತೆ ನಮ್ಮ ಮೂರನೇ ಪತ್ರಿಕೆಯನ್ನು ತರಲು ಗುದ್ದಾಡಿದೆವು. ನಮ್ಮ ದುರದೃಷ್ಟವೆಂಬಂತೆ ವಿದ್ಯುತ್ ಕೈಕೊಟ್ಟಿತು. ಆದರು ದೃತಿಗೆಡದೆ ಎಲ್ಲರು ಕೂಡಿ ಕರೆಂಟ್ ಬಂದ ಮೇಲೆ ಕೆಲಸ ಪ್ರಾರಂಭ ಮಾಡಿದೆವಾದರು ಅಂದು ಆ ಪತ್ರಿಕೆ ಬರಲೇಯಿಲ್ಲಾ. ಮನಸ್ಸಿಗೆ ಬಹಳ ನೋವಾದರೂ ಡೆಡ್ ಲೈನ್ ಮಹತ್ವ ಅಂದು ಮನದಟ್ಟಾಯಿತು. ಎಷ್ಟೇ ಕಹಿ ಅನುಭವಗಳಾದರೂ ಡೆಕಾಥ್ಲಾನ್ ನಮ್ಮ ಒಗ್ಗಟ್ಟಿನ ಬಗ್ಗೆ ಮತ್ತು ಆ ಕೆಲಸದ ಬಗ್ಗೆ ತೃಪ್ತಿಯನ್ನು ಕೊಟ್ಟಿತು. ಹರ್ಷ ಸರ್ ಹೊಗಳಿಕೆಯಂತೂ ನಮಗೆ ಬಹಳ ಹರ್ಷ ತಂದಿತು. ಇದರಿಂದ ನಮ್ಮ ಆತ್ಮ ವಿಶ್ವಾಸವೂ ಹೆಚ್ಚಿತು.



No comments:

Post a Comment